ಗುರುದೇವ
ಈ ಬದುಕೆಂಬ ಸಾಗರದಿ
ತೇಲುವ ದೋಣಿ ನಾನ್ನಯ್ಯ||
ನನಗೆ ನೀನೇ ದಿಕ್ಕು ಅಯ್ಯಾ
ನಿನ್ನ ಸೇರುವುದೇ ನನ್ನ ಗುರಿ ಅಯ್ಯಾ ||
ಸಾಗರದ ಆಚೆ ನಿಂತಿರುವೆ ನೀನು
ನಿನ್ನನ್ನು ಕಾಣಲು ಹಂಬಲಿಸಿದೆ ನಾನು||
ಎದುರಿಸಿ ಕಡಲ ಅಲೆ-ಅಲೆಗಳನ್ನು
ದಡಮುಟ್ಟಿ ಸೇರಬೇಕು ನಾನು ನಿನ್ನನ್ನು||
ಕೊಡು ಬುದ್ಧಿ ದಾಟಲು ಸಾಗರವನ್ನು
ತಲುಪಿಯೇ ತೀರುವೆ ನಾನು ನಿನ್ನನ್ನು||
ನನ್ನ ಭಕ್ತಿಗೆ ಅರ್ಥವಿಲ್ಲವೇನು?
ದರುಶನವ ನೀಡಿ ಕೃಪೆ ತೋರಿ ಗುರುದೇವ||
ಬಂಧುಗಳೇ ನಾನೆನು ಸಾಹಿತಿಯಲ್ಲ, ಕವಿಯಲ್ಲಾ ನಾನೊಬ್ಬ ಸಾಹಿತ್ಯಪ್ರಿಯ ಸಾಹಿತ್ಯದ ಕಡೆ ಒಲವು ಇಟ್ಟುಕೊಂಡವನ್ನು ಹಾಗಾಗಿ ನನಗೆ ತಿಳಿದಷ್ಟು ಮಟ್ಟಿಗೆ ಕವನಗಳನ್ನು ರಚಿಸುತ್ತಿರುವೆ ತಪ್ಪಾಗಿದಲ್ಲಿ ದಯವಿಟ್ಟು ಕ್ಷಮಿಸಿರಿ.
ಇಂತಿ ನಿಮ್ಮ ಬಿ.ಎಸ್.ಕೆಂಗನಾಳ
Post a Comment